ಈ ಪ್ರದೇಶದ ಪ್ರಸಿದ್ಧ ಆಕರ್ಷಣೆಯಾದ ಬಾದಾಮಿ ಕೋಟೆಯೂ ಪರ್ವತದ ತುತ್ತ ತುದಿಯಲ್ಲಿ ಬಾದಾಮಿ ಗುಹೆಗಳ ಎದುರಿನಲ್ಲೇ ನೆಲೆಸಿದೆ. ಈ ಕೋಟೆಯೂ ಪ್ರಮುಖ ಪಟ್ಟಣದಿಂದ 2 ಕಿಮೀ ದೂರ ಮತ್ತು ಭೂತನಾಥ ದೇವಾಲಯದ ಪೂರ್ವಕ್ಕೆ ನೆಲೆಸಿದೆ. ಇದು ಒಂದು ಕಾಲದಲ್ಲಿ ಚಾಲುಕ್ಯ ಸಾಮ್ರಾಜ್ಯದ ಅರಸರ ವಾಸ ಸ್ಥಳವಾಗಿತ್ತು. ಕೇವಲ ಕಾಲ್ನಡಿಗೆಯಲ್ಲಿ ಮಾತ್ರ ತಲುಪಬಹುದಾದ ಈ ದೇವಾಲಯವು ವಿಷ್ಣುವನ್ನು ಪೂಜಿಸುತ್ತಿದ್ದ ಎರಡನೇ ಪುಲಿಕೇಶಿಯು 5ನೇ ಶತಮಾನದಲ್ಲಿ ನಿರ್ಮಿಸಿದನು. ಇದು ಎರಡು ಶಿವಾಲಯ ಸಂಕೀರ್ಣಗಳನ್ನು ಒಳಗೊಂಡಿದೆ.
ಮೇಲ್ಭಾಗದ ಶಿವಾಲಯವನ್ನು ಪರಮ ಶಿವನಿಗೆ ಮತ್ತು ಕೆಳಭಾಗವನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಸಂದರ್ಶಕರು ಮೇಲಿನ ಶಿವಾಲಯದ ಗೋಡೆಗಳ ಮೇಲೆ ಆನೆ ಮತ್ತು ಸಿಂಹ ಕಥೆಯ ರೀತಿಯ ದಂತ ಕಥೆಗಳ ಕೆತ್ತನೆಗಳನ್ನು ಕಾಣಬಹುದಾಗಿದೆ. ಟಿಪ್ಪು ಸುಲ್ತಾನನಿಗೆ ಸಂಬಧಿಸಿದ ಒಂದು ಫಿರಂಗಿಯನ್ನು ಕೆಳಭಾಗದ ಶಿವಾಲಯದಲ್ಲಿ ಉತ್ತರ ದಿಕ್ಕಿಗೆ ಕಾಣಬಹುದು. ಇದು 14ನೇ ಶತಮಾನದ ಒಂದು ವೀಕ್ಷಣಾ ಗೋಪುರದ ಸಾನಿಧ್ಯದಲ್ಲಿದೆ. ಈ ಪ್ರದೇಶದಲ್ಲಿ ನೋಡಲೆಬೇಕೆನಿಸುವ ಜಾಗಗಳನ್ನು ಏಣಿಸಿದಾಗ ಕೋಟೆಯಲ್ಲಿರುವ ಬೃಹತ್ತಾದ ದಾಸ್ತಾನು, ಖಾಸಗೀ ಒಳಾಂಗಣ, ಆಕ್ರಮಣದಿಂದ ರಕ್ಷಣೆಗಾಗಿ ಗೋಡೆಗಳು ಮತ್ತು ಒಂದು ನೆಲಮಾಳಿಗೆಯ ರಹಸ್ಯ ಕೊಠಡಿ ಇವುಗಳನ್ನು ಕೂಡ ಸೇರಿಸಬಹುದು.