ಹರಿದ್ವಾರದಲ್ಲಿರುವ ಹರ್ ಕಿ ಪೈದಿಯಂತೆ ರಾಮ್ ಕಿ ಪೈದಿಯಿದೆ. ಅಯೋಧ್ಯಾದ ಸರಾಯು ನದಿಯ ದಂಡೆ ಬಳಿ ನಯಾಘಾಟ್ ನಲ್ಲಿರುವ ಹೆಜ್ಜೆಗಳ ಸಾಲು. ಇಲ್ಲಿ ಐತಿಹಾಸಿಕ ನದಿಯಲ್ಲಿ ಭಾರೀ ಸಂಖ್ಯೆಯ ಯಾತ್ರಾರ್ಥಿಗಳು ಮತ್ತು ಭಕ್ತರು ಸ್ನಾನ ಮಾಡುತ್ತಾರೆ.
ಮೂಲ ಹೆಜ್ಜೆ ಅಥವಾ ಪೈದಿಗಳು ಧಾರಾಕಾರ ಮಳೆ ಮತ್ತು ನದಿಯ ಪ್ರವಾಹದಿಂದ ಕೊಚ್ಚಿ ಹೋಗಿದೆ. ಹೊಸ ಘಾಟ್ ನ್ನು 1984-85ರಲ್ಲಿ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಶ್ರೀಪತಿ ಮಿಶ್ರಾ ಮತ್ತು ನೀರಾವರಿ ಸಚಿವ ವೀರ್ ಬಹದೂರ್ ಸಿಂಗ್ ಅವರ ಜಂಟಿ ಶ್ರಮದಿಂದ ನಿರ್ಮಾಣವಾಗಿತ್ತು.
ಸರಾಯು ನದಿಯಿಂದ ಮೋಟರ್ ಪಂಪ್ ಗಳನ್ನು ಬಳಸಿ ಘಾಟ್ ಗೆ ನೀರನ್ನು ಎತ್ತಲಾಗುತ್ತದೆ. ಉತ್ತರ ಪ್ರದೇಶದ ನೀರಾವರಿ ವಿಭಾಗದ ಪ್ರವಾಹ ಕೆಲಸ ವಿಭಾಗ ಘಾಟ್ ನ ನಿರ್ವಹಣೆ ಮತ್ತು ನೀರಿನ ಸರಬರಾಜನ್ನು ನೋಡಿಕೊಳ್ಳುತ್ತಿದೆ.
ಶ್ರೀರಾಮನಿಗೆ ಸಂಬಂಧಿಸಿದ ಯಾವುದೇ ಹಬ್ಬ ಬಂದರೂ ಆ ಸಮಯದಲ್ಲಿ ರಾಮ್ ಕಿ ಪೈದಿಯಲ್ಲೀ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಸರಾಯು ನದಿಯ ಪವಿತ್ರ ನೀರಿನಲ್ಲಿ ಸ್ನಾನ ಮಾಡಿ ಪಾಪ ಕಳೆಯಲು ಯಾತ್ರಾರ್ಥಿಗಳು ಸೇರುತ್ತಾರೆ.