ಅಯೋಧ್ಯಾವನ್ನು ಶ್ರೀರಾಮನ ಜನ್ಮಸ್ಥಳವೆಂದು ಕರೆಯಲಾಗುತ್ತಿದೆಯಾದರೂ ನಗರದ ರಾಮ್ ಕೊಟ್ ವಾರ್ಡ್ ನಲ್ಲಿ ಅವರು ಜನಿಸಿದರೆಂದು ಹೇಳುವ ನಿರ್ದಿಷ್ಟ ಸ್ಥಳವಿದೆ. ಈ ಸ್ಥಳವನ್ನು ರಾಮ ಜನ್ಮ ಭೂಮಿ ಎಂದು ಕರೆಯಲಾಗುತ್ತದೆ. ಶ್ರೀರಾಮನಿಗೆ ಅರ್ಪಿತವಾದ ಸಣ್ಣ ಮಂದಿರದಿಂದ ಈ ಪ್ರದೇಶ ಗುರುತಿಸಲ್ಪಡುತ್ತದೆ.
15ನೇ ಶತಮಾನದಲ್ಲಿ ಮುಘಲ್ ದೊರೆ ಬಾಬರ್ ಈ ಪ್ರದೇಶವನ್ನು ಆಕ್ರಮಿಸಿ ಮಂದಿರವನ್ನು ಧ್ವಂಸ ಮಾಡಿ ಆ ಸ್ಥಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದ. 1528 ರಿಂದ 1853 ರ ತನಕ ಈ ಸ್ಥಳವು ಮುಸ್ಲಿಮರಿಗೆ ಆರಾಧನಾ ಕೇಂದ್ರವಾಗಿತ್ತು. ಇದೊಂದು ವಿವಾದಾತ್ಮಕ ಪ್ರದೇಶ ಮತ್ತು ಎರಡು ಕೋಮುಗಳ ಮಧ್ಯೆ ಆಗಾಗ ಗಲಭೆಗಳಾಗುತ್ತಿದ್ದ ಕಾರಣಕ್ಕೆ ಸರ್ಕಾರ ಹಿಂದೂ ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ಪ್ರಾರ್ಥನಾ ಸ್ಥಳವನ್ನು ಒದಗಿಸಿಕೊಟ್ಟಿತು.
1949 ರಲ್ಲಿ ರಾಮನ ಭಕ್ತರೆಲ್ಲಾ ಸೇರಿಕೊಂಡು ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನನ ಮೂರ್ತಿಗಳನ್ನು ಈ ಪ್ರದೇಶದಲ್ಲಿ ಸ್ಥಾಪಿಸಿದರು. ಮಾತಾ ಸೀತಾ ಕಿ ರಸೋಯಿ(ಹನುಮಂತನಿಗಾಗಿ ಇರುವ ಮಂದಿರದೊಂದಿಗೆ ಇದು ಒಂದು ಮಂದಿರ)ಯನ್ನು ಸುತ್ತುವರಿದಿದ್ದ ಮಸೀದಿಯನ್ನು 1996 ಡಿಸೆಂಬರ್ 6 ರಂದು ಧ್ವಂಸಗೊಳಿಸಲಾಯಿತು. ಮಸೀದಿ ಧ್ವಂಸ ಬಳಿಕ ರಾಷ್ಟ್ರದಾದ್ಯಂತ ಕೋಮುಗಲಭೆ ವ್ಯಾಪಿಸಿತು. ಇದು ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಮಟ್ಟದ ಕೋಮುಗಲಭೆಯಾಗಿದೆ.