ಅಯೋಧ್ಯಾದ ರಾಮ್ ಕಿ ಪೈದಿಯಲ್ಲಿರುವ ನಾಗೇಶ್ವರನಾಥ್ ಮಂದಿರವು ಹೆಸರೇ ಹೇಳುವಂತೆ ಶಿವನ ಮಂದಿರವಾಗಿದೆ. ಶಿವನನ್ನು ನಾಗೇಶ್ವರ ನಾಥ ಅಥವಾ ಸರ್ಪಗಳ ಒಡೆಯನೆಂದು ಕರೆಯಲಾಗುತ್ತದೆ. ಈ ಮಂದಿರದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು ಈ ಮಂದಿರದ ಗರ್ಭಗುಡಿಯಲ್ಲಿದೆ.
ಪುರಾಣಗಳಲ್ಲಿ ಇರುವಂತೆ ಒಂದು ದಿನ ರಾಮನ ಕಿರಿಯ ಮಗ ಕುಶ ಸರಾಯು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ತೋಳುಪಟ್ಟಿ ಜಾರಿ ನೀರಿನೊಳಗೆ ಬಿತ್ತು. ಆತ ಇದಕ್ಕಾಗಿ ಹುಡುಕಾಡಿದರೂ ಅದು ಸಿಗಲೇ ಇಲ್ಲ. ಶಿವನ ಭಕ್ತೆಯಾಗಿದ್ದ ನಾಗನ ಮಗಳು ನಾಗಕನ್ಯೆಗೆ ತೋಳುಪಟ್ಟಿ ಸಿಗುತ್ತದೆ. ಕೃತಜ್ಞತಾಪೂರ್ವಕವಾಗಿ ಕುಶ ನಾಗೇಶ್ವರನಾಥ ಮಂದಿರ ನಿರ್ಮಿಸಿದ.
ನಗರದ ಉಳಿದ ಭಾಗಗಳು ನಾಮಾವಶೇಷಗೊಂಡರೂ ಚಂದ್ರಗುಪ್ತ ವಿಕ್ರಮಾದಿತ್ಯನ ಕಾಲದವರೆಗೆ ಮಂದಿರವು ಉತ್ತಮ ಸ್ಥಿತಿಯಲ್ಲಿತ್ತು. 1750ರಲ್ಲಿ ಸಫ್ದರ್ ಜಂಗ್ ನ ಸಚಿವ ನವಲ್ ರೈ ಈ ಮಂದಿರವನ್ನು ಪುನರ್ ನಿರ್ಮಿಸಿದ. ಶಿವರಾತ್ರಿ ಹಬ್ಬದ ವೇಳೆ ಸಾವಿರಾರು ಮಂದಿ ಭಕ್ತರು ಮಂದಿರಕ್ಕೆ ಆಗಮಿಸುತ್ತಾರೆ. ಈ ವೇಳೆ ಶಿವನ ಮೆರವಣಿಗೆ ಕೂಡ ನಡೆಯುತ್ತದೆ.