ಅಯೋಧ್ಯಾ ನಗರದ ಕೇಂದ್ರ ಭಾಗದಲ್ಲಿ ದಶರಥ ಭವನವಿದೆ. ಶ್ರೀರಾಮನ ತಂದೆ ದಶರಥ ರಾಜನ ಮೂಲ ಅರಮನೆಯಿದ್ದ ಸ್ಥಳದಲ್ಲೇ ಈ ಭವನವನ್ನು ಕಟ್ಟಲಾಗಿದೆ. ಶ್ರೀರಾಮ ಮತ್ತು ಆತನ ಸೋದರರು ಇದೇ ಸ್ಥಳದಲ್ಲಿ ಬಾಲ್ಯ ಹಾಗೂ ಯೌವನವನ್ನು ಕಳೆದಿದ್ದರು. ಈ ಭವನದಲ್ಲಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳಿವೆ. ಮಂದಿರಕ್ಕೆ ದೊಡ್ಡ ಹಾಗೂ ಬಣ್ಣಬಣ್ಣದ ಪ್ರವೇಶದ್ವಾರವಿದೆ.
ಈ ಮಂದಿರಕ್ಕೆ ಭೇಟಿ ನೀಡಿದರೆ ನಿಮ್ಮನ್ನಲ್ಲಿ ಧಾರ್ಮಿಕ ಆಸಕ್ತಿಯನ್ನು ಹಿಡಿದಿಡುತ್ತದೆ. ಕಾವಿ ಧರಿಸಿದ ಸಾಧುಗಳು ಹಾಗೂ ಸನ್ಯಾಸಿಗಳು ರಾಮಾಯಣದ ದೊಹಾಸ್ ಮತ್ತು ಚೌಪಯಿಸ್ ಗಳನ್ನು ಹಾಡುತ್ತಿರುತ್ತಾರೆ. ಕೆಲವು ಧರ್ಮಗ್ರಂಥಗಳೊಂದಿಗೆ ಕಲಾವಿದರ ಸಂಗೀತ ಸಾಧನಗಳನ್ನು ನುಡಿಸುವ ಕಲಾವಿದರನ್ನೂ ಇಲ್ಲಿ ಕಾಣಬಹುದು.
ರಾಜ ದಶರಥನ ಅರಮನೆಗಿಂತ ಈ ಭವನ ತುಂಬಾ ಸಣ್ಣದಿದೆ. ಆದಾಗ್ಯೂ ಶ್ರೀರಾಮನ ಜನ್ಮಸ್ಥಳ ಮತ್ತು ಆತನ ಬಾಲ್ಯ ಹಾಗೂ ಯೌವನವನ್ನು ಕಳೆದ ಸ್ಥಳವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸುತ್ತಾರೆ.