ತಪೋವನದಿಂದ ನಡೆದುಕೊಂಡೆ ಭವಿಷ್ಯ ಬದ್ದ್ರಿ ತಲುಪಬಹುದು. ದಟ್ಟವಾದ ಅರಣ್ಯದ ಮಧ್ಯ ಭಾಗದಲ್ಲಿ ಈ ಪ್ರದೇಶ ಇದೆ. ಇದು ಬದರಿಯ ದೇವಾಲಯಗಳಲ್ಲಿ ಒಂದಾಗಿದ್ದು ಸಮುದ್ರ ಮಟ್ಟದಿಂದ ಸುಮಾರು 2744 ಮೀ.ಎತ್ತರದಲ್ಲಿದೆ. ಇತರ ದೇವಾಲಯಗಳೆಂದರೆ ಬದರಿನಾಥ್, ಯೋಗ್ ಧ್ಯಾನ್, ಆದಿ ಬದರಿ ಹಾಗೂ ವೃಧಾ ಬದರಿ.
ನಂಬಿಕೆಗಳ ಪ್ರಕಾರ, ಭವಿಷ್ಯದ ದಿನಗಳಲ್ಲಿ ಬದರಿನಾಥ್ ದೇವಾಲಕ್ಕೆ ಹೋಗಲು ಸಾಧ್ಯವಾಗದ ಕಾರಣ ಇದನ್ನೆ ಬದರಿನಾಥ್ ದೇವಾಲಯಕ್ಕೆ ಸಮವಾಗಿ ಪೂಜಿಸಬೇಕಾಗುತ್ತದೆ. ವಿಷ್ಣುವಿನ ಅವತಾರವಾದ ನರಸಿಂಹನ ವಿಗ್ರಹವನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ತಪೋವನದ ನಂತರ ಪ್ರವಾಸಿಗರು ಟ್ರೆಕ್ಕಿಂಗ್ ಮೂಲಕ ಈ ಪ್ರದೇಶವನ್ನು ತಲುಪಬಹುದಾಗಿದ್ದು, ಕೊನೆಯದಾಗಿ ಈ ಮಾರ್ಗವು ಧೌಲಿಗಂಗಾ ನದಿಗೆ ಕರೆದುಕೊಂಡು ಹೋಗುತ್ತದೆ.