15ನೇ ಶತಮಾನದಲ್ಲಿ ನಿರ್ಮಾಣಗೊಂಡ ಐಶ್ಮುಖಂ ಗುಡಿ ಅನಂತ್ನಾಗ್ನ ಅತ್ಯಂತ ಪ್ರಮುಖ ಯಾತ್ರಾಸ್ಥಳವಾಗಿದೆ. ಇದನ್ನು ಪ್ರಸಿದ್ಧ ರೆಶಿ ಅನುಯಾಯಿಗಳ ಮುಖ್ಯಸ್ಥರಲ್ಲಿ ಒಬ್ಬರಾದ ಶೇಖ್ ನೂರ್-ಉದ್-ದಿನ್ರವರ ಗೌರವಾರ್ಥ ನಿರ್ಮಿಸಲಾಗಿದೆ. ಒಂದಾನೊಂದು ಕಾಲದಲ್ಲಿ ಐಶ್ಮುಖಂ ಪಟ್ಟಣದಲ್ಲಿನ ಬೆಟ್ಟಗಳು ಹಝರತ್ ಝೈನ್ ಉದ್ ದಿನ್ ವಾಲಿಯವರ ನಿವಾಸವಾಗಿತ್ತು. ಆದ್ದರಿಂದ ಈ ಸ್ಥಳವು ವಿವಿಧ ಧರ್ಮದ ಅನುಯಾಯಿಗಳಿಗೆ ಅತ್ಯಂತ ಪವಿತ್ರವಾಗಿದೆ.
ಪ್ರಸಿದ್ಧ ನಂಬಿಕೆಯ ಪ್ರಕಾರ ಹಝರತ್ ಝೈನ್ ಉದ್ ದಿನ್ ವಾಲಿಯವರು ಅಲ್ಲಾರವರ ಬಗ್ಗೆ ಪ್ರವಚನ ನೀಡುತ್ತ ಇಲ್ಲಿ ತಮ್ಮ ಜೀವನವನ್ನು ಕಳೆದರೆಂದು ನಂಬಲಾಗಿದೆ. ಈ ಉದ್ದೇಶಕ್ಕಾಗಿ ಹಝರತ್ ಝೈನ್ ಉದ್ ದಿನ್ ವಾಲಿಯವರು ತಮ್ಮನ್ನು ತಾವು ಒಂದು ಗುಹೆಗೆ ಸೀಮಿತಗೊಳಿಸಿಕೊಂಡರಂತೆ. ಐಶ್ಮುಖಂ ಸಮಾಧಿಗೆ ಪ್ರತಿ ವರ್ಷ ನಡೆಯುವ ಉರುಸ್ ಮತ್ತು ಝೂಲ್ ಉತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.