ಅಮೃತಸರದಿಂದ 22 ಕಿ.ಮೀ. ದೂರದಲ್ಲಿರುವ ಟಾರ್ನ್ ತರನ್ ಪಂಜಾಬ್ ನಲ್ಲಿರುವ ಒಂದು ಜಿಲ್ಲೆಯಾಗಿದೆ. 5ನೇ ಸಿಖ್ ಗುರು ಅರ್ಜುನ್ ದೇವ್ ಜೀ ಅವರು ಸ್ಥಾಪಿಸಿದ ಟಾರ್ನ್ ತರನ್ ಎಂಬ ನಗರದಲ್ಲಿ ಜಿಲ್ಲೆಯ ಕೇಂದ್ರ ಕಚೇರಿಯಿದೆ. ಸಿಖ್ ಸಮುದಾಯದವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಈ ಟಾರ್ನ್ ತರನ್ ಸಾಹೀಬ್, ಸಾಕಷ್ಟು ಐತಿಹಾಸಿಕ ಗುರುದ್ವಾರಗಳಿಗೆ ಮನೆಯಾಗಿದೆ. ಅದರಲ್ಲಿ ಪ್ರಮುಖವಾದುದೆಂದರೆ, ದರ್ಬಾರ್ ಸಾಹೀಬ್ ಶ್ರೀ ಅರ್ಜುನ್ ದೇವ್ ಜಿ. ಇಲ್ಲಿನ ಪವಿತ್ರ ಸರೋವರ ವಿಶ್ವದಲ್ಲೇ ಅತಿದೊಡ್ಡ ಸರೋವರವೆನಿಸಿಕೊಂಡಿದೆ. ಟಾರ್ನ್ ತರನ್ ಎಂಬ ಸರೋವರದ ನಂತರ ನಗರವನ್ನು ಹಸರಿಸಲಾಗಿದೆ.