ಶ್ರೀರಾಮ ತೀರಥ್ ಮಂದಿರವನ್ನು ಋಷಿ ವಾಲ್ಮೀಕಿಯ ಪ್ರಾಚೀನ ಆಶ್ರಮವಿದ್ದ ಸ್ಥಳವೆಂದೇ ಜನಜನಿತ. ಶ್ರೀರಾಮನಿಗೆ ಸಮರ್ಪಿಸಿದ ಈ ಮಂದಿರವು ಅಮೃತಸರದಿಂದ ಸುಮಾರು 11 ಕಿ.ಮೀ. ದೂರದಲ್ಲಿದೆ.
ದಂತ ಕಥೆಯ ಪ್ರಕಾರ, ತ್ರೇತಾಯುಗದಲ್ಲಿ ಶ್ರೀರಾಮನು ಸೀತಾಮಾತೆಯನ್ನು ತೊರೆದಾಗ ಋಷಿ ವಾಲ್ಮಿಕಿಯು ಇದೇ ಆಶ್ರಮದಲ್ಲಿ ಸೀತಾಮಾತೆಗೆ ಆಶ್ರಯ ನೀಡಿದ್ದನಂತೆ. ರಾಮಾಯಣದ ಕಾಲದಿಂದ, ಶ್ರೀರಾಮ ತೀರ್ಥ ಮಂದಿರ ಹಲವು ದೇವಾಲಯಗಳನ್ನು, ಪ್ರಾಚೀನ ಕೊಳಗಳನ್ನು ಮಂದಿರದ ಆವರಣದಲ್ಲಿಯೇ ಇರುವುದು ಕಂಡುಬರುತ್ತದೆ.
ಈ ಮಂದಿರದ ಮುಖ್ಯ ಆಕರ್ಷಣೆಯೆಂದರೆ, ಶ್ರೀರಾಮನ ಮಕ್ಕಳಾದ ಲವ-ಕುಶ ಜನಿಸಿದ ಜೋಪಡಿ ಮತ್ತು ಹನುಮಂತನು ಅಗೆದ ಒಂದು ಸರೋವರ. ಋಷಿ ವಾಲ್ಮಿಕಿಯ ಜೋಪಡಿ ಮತ್ತು ಮಾತೆ ಸೀತೆ ಬಳಸುತ್ತಿದ್ದ ಸ್ನಾನದ ಗೃಹವನ್ನು ಮಂದಿರದ ಆವರಣದಲ್ಲಿ ಸುರಕ್ಷಿತವಾಗಿ ಕಾಪಾಡಲಾಗಿದೆ. ನವೆಂಬರ್ ತಿಂಗಳ ಹುಣ್ಣಿಮೆಯ ದಿನದಂದು ಶ್ರೀರಾಮ ತೀರ್ಥ ಮಂದಿರವು 4 ದಿನಗಳ ವಾರ್ಷಿಕ ಜಾತ್ರಿಯನ್ನು ಹಮ್ಮಿಕೊಳ್ಳುತ್ತದೆ. ಅಮೃತಸರದ ಪ್ರವಾಸಿಗರು ಇಲ್ಲಿ ಭೇಟಿ ಕೊಡುವುದು ಸೂಕ್ತ.