ಗೋಲ್ಡನ್ ಟೆಂಪರ್ ಆವರಣದ ಅಮೃತಸರೋವರದ ಪೂರ್ವಭಾಗದಲ್ಲಿ ಈ ದುಃಖ ಭಂಜನಿ ವೃಕ್ಷವನ್ನು ಬೆಳೆಸಲಾಗಿದೆ. ಸಂಕೀರ್ಣದ 3 ಪವಿತ್ರ ಜುಜುಬೆ ವೃಕ್ಷಗಳಲ್ಲಿ ಒಂದಾದ ದುಃಖ ಭಂಜನಿ ಬೆರ್ ವೃಕ್ಷ ಒಂದು ದಂತಕಥೆಗೆ ಸಂಬಂಧಿಸಿದೆ. ಆ ವೃಕ್ಷದ ಪಕ್ಕದಲ್ಲಿದ್ದ ಈಜುಕೊಳ ಕುಷ್ಠರೋಗಿಯಾಗಿದ್ದ ಬೀಬಿ ರಜನಿಯ ಗಂಡನನ್ನು ರೋಗದಿಂದ ವಿಮುಕ್ತಗೊಳಿಸಿತಂತೆ.
ಈ ಅದ್ಭುತವನ್ನು ಕೇಳಿದ ಕೂಡಲೆ ಗುರು ರಾಮದಾಸಜಿ ಜಲಾಶಯವನ್ನು ಸ್ನಾನದ ಕೊಳವಾಗಿ ಪರಿವರ್ತನೆಗೊಳಿಸಿ, ವೃಕ್ಷವನ್ನು ದುಃಖ ಭಂಜನಿ ಬೆರ್ ಎಂದು ನಾಮಕರಣ ಮಾಡಿದರು. ಇದರ ಅರ್ಥವೇನೆಂದರೆ, ದುಃಖಗಳನ್ನು ದೂರಗೊಳಿಸುವ ವೃಕ್ಷ ಎಂದು. ಪೂರ್ವಾಧಿಕಾರಿ ಹಾಗು ಮಾವನ ಸಲಹೆ ಮೇರೆಗೆ ಗುರು ಅಮರದಾಸಜಿ ಈ ಸ್ಥಳವನ್ನು ಸಿಖ್ರ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡಿದರು. ದುಃಖ ಭಂಜನಿ ವೃಕ್ಷದ ಬಳಿ ಇರುವ ಪವಿತ್ರ ತೀರ್ಥಕ್ಕೆ ರೋಗ ನಿವಾರಿಸುವ ಗುಣವಿಲ್ಲದಿದ್ದರೆ ಅಮೃತ ಸರೋವರವಾಗಲಿ ಅಥವಾ ಗೋಲ್ಡನ್ ಟೆಂಪಲ್ ಆಗಲಿ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಆ ಕೊಳದ ಮೇಲೆ ಜನರಲ್ಲಿರುವ ಅಪಾರವಾದ ನಂಬಿಕೆ ಇರುವುದರಿಂದ ದುಃಖ ಭಂಜನಿ ವೃಕ್ಷಕ್ಕೆ ಭೇಟಿ ಕೊಡಲೇಬೇಕು.