ಗೋಲ್ಡನ್ ಟೆಂಪಲ್ ಆವರಣದಲ್ಲಿ ಮೂರು ಪವಿತ್ರ ವೃಕ್ಷಗಳು ನೆಲೆಗೊಂಡಿವೆ. ಲಾಚಿ ಬೆರ್ ಒಂದಾದರೆ ದುಃಖ್ ಭಂಜನಿ ಬೆರ್ ಮತ್ತೊಂದು. ಅಮೃತ ಸರೋವರದ ಉತ್ತರ ಭಾಗದ ತಟದಲ್ಲಿ ಈ ಜುಜುಬೆ ವೃಕ್ಷವನ್ನು ಸಿಖ್ರ ಪೂಜ್ಯ ಗುರುಗಳಲ್ಲಿ ಒಬ್ಬರಾಗಿರುವ ಬಾಬಾ ಬುದ್ಧರ ನಂತರ ಹೆಸರಿಸಲಾಗಿದೆ. ಇದೇ ವೃಕ್ಷ ಛತ್ರಿ ಆಕಾರದ ಎಲೆಗಳ ನೆರಳ ಕೆಳಗೆ ಬಾಬಾ ಬುದ್ಧರು ಕೂತು ಸರೋವರದ ಉತ್ಖನನ ಕೆಲಸವನ್ನು ನಿರೀಕ್ಷಿಸುತ್ತಿದ್ದರು ಹಾಗು ಮೇಲ್ವಿಚಾರಣೆ ನಡೆಸುತ್ತಿದ್ದರು.
ಇವರ ಹಠೋತ್ಸಾಹಕ್ಕೆ ಮತ್ತು ಭಕ್ತಿಗೆ ಮೆಚ್ಚಿ ಗುರು ಅರ್ಜುನ್ ದೇವಜಿಯವರು, 1604ರಲ್ಲಿ ಮೊದಲ ಬಾರಿಗೆ ಆದಿ ಗ್ರಂಥವನ್ನು ಹರಮಂದಿರ ಸಾಹೀಬ್ ನಲ್ಲಿ ಪ್ರತಿಷ್ಠಾಪಿಸಿದಾಗ ಇವರಿಗೆ ಗ್ರಂಥಿ ಎಂದು ನೇಮಕಾತಿ ಮಾಡಿದ್ದರು. ಮೊಟ್ಟಮೊದಲ ಅರ್ಚಕರಾದ ಬಾಬಾ ಬುದ್ಧ ಕಡೆಯ ದಿನಗಳನ್ನು ರಾಮದಾಸ ಹಳ್ಳಿಯಲ್ಲಿ ಕಳೆದರು. ಇದು ಗೋಲ್ಡನ್ ಟೆಂಪಲ್ ಎದುರಿಗೆ ಉಪಸ್ಥಿತವಿದೆ. ಗೋಲ್ಡನ್ ಟೆಂಪಲ್ ಭೇಟಿ, ಬೆರ್ ಬಾಬಾ ಬುದ್ಧ ಸ್ಥಳವನ್ನು ನೋಡದೆ ಪರಿಪೂರ್ಣವಾಗುವುದಿಲ್ಲ.