ಅಮ್ರಾವತಿಯ ಹೃದಯ ಭಾಗದ ಗಾಂಧಿ ವೃತ್ತದಲ್ಲಿರುವ ಅಂಬಾದೇವಿ ದೇವಾಲಯವು ತಾಯಿ ಅಂಬಾ ದೇವಿಗಾಗಿ ಕಟ್ಟಲಾಗಿರುವ ದೇವಾಲಯವಾಗಿದೆ. ಪ್ರಾಚೀನ, ಧಾರ್ಮಿಕ ಕೇಂದ್ರವಾದ ಈ ದೇವಾಲಯದ ಕುರಿತಾದ ಉಲ್ಲೇಖಗಳು ಪ್ರಾಚೀನ ಬರಹಗಳಲ್ಲಿ ಕಾಣಬಹುದು. ನಂಬಿಕೆಗಳ ಪ್ರಕಾರ, ರಾಜ ಭೀಷ್ಮಕನ ಮಗಳಾದ ರುಕ್ಮಿಣಿಯು ಶಿಶುಪಾಲನ ಜೊತೆ ಮದುವೆ ಆಗುವ ಮೊದಲು ಈ ದೇವಾಲಯಕ್ಕೆ ಭೇಟಿಕೊಟ್ಟಿದ್ದಳಂತೆ. ಶ್ರೀ ಕೃಷ್ಣನು ಆಕೆಯನ್ನು ಇಲ್ಲಿಂದಲೆ ಅಪಹರಿಸಿ ನಂತರ ಆಕೆಯೊಂದಿಗೆ ಮದುವೆಯಾದನೆಂದು ಹೇಳಲಾಗುತ್ತದೆ.
ಅಂಬಾದೇವಿಯು ದೇಶದಾದ್ಯಂತ ಅಸಂಖ್ಯಾತ ಭಕ್ತ ವೃಂದವನ್ನು ನವರಾತ್ರಿ ಮತ್ತು ದಸರಾ ಸಂದರ್ಭಗಳಲ್ಲಿ ತನ್ನತ್ತ ಆಕರ್ಷಿಸುತ್ತದೆ. ಇದರ ಜೊತೆಗೆ ಇಲ್ಲಿ ನಡೆಯುವ ದೇವರ ಜಾತ್ರೆಗೆ ಜನ ಬಹುಸಂಖ್ಯೆಯಲ್ಲಿ ಸೇರುತ್ತಾರೆ.