ಈ ಜಲಪಾತವನ್ನು ಸಂದರ್ಶಿಸಲು ಪಾಪನಾಸಂ ದೇವಾಲಯದಿಂದ ಸುಮಾರು ನಾಲ್ಕು ಕಿ.ಮೀ ಯಷ್ಟು ದೂರ ಬೆಟ್ಟದ ಮೇಲೆ ಚಾರಣ ಮಾಡಬೇಕು. ಸುಮಾರು ನೂರು ಮೀಟರ್ ಎತ್ತರದಿಂದ ಧುಮುಕುವ ನದಿ ಬಂಡೆಗಳ ಮೇಲೆ ಬೀಳುವ ರಭಸಕ್ಕೆ ಇರಿಚಲನ್ನು ಉಂಟುಮಾಡುತ್ತದೆ. ಇನ್ನೂ ಕೊಂಚ ಮೇಲಕ್ಕೆ ಚಾರಣ ಮಾಡಿದರೆ ನದಿಯ ಉಗಮಸ್ಥಾನವಾದ ಕಲ್ಯಾಣತೀರ್ಥಂ ಜಲಪಾತವನ್ನೂ ಸಂದರ್ಶಿಸಬಹುದು. ಆದರೆ ಉಗಮಸ್ಥಾನದೆದುರು ಗೋಡೆಯಂತಹ ಬಂಡೆಯೊಂದು ಅಡ್ಡವಿರುವುದರಿಂದ ಪೂರ್ಣ ದರ್ಶನ ಸಾಧ್ಯವಿಲ್ಲ. ಪುರಾಣದ ಪ್ರಕಾರ ಶಿವನು ಪಾರ್ವತಿಯನ್ನು ವರಿಸುವಾಗ ದಕ್ಷಿಣಭಾರತದಿಂದ ಆಗಮಿಸುವ ಜನಪ್ರವಾಹದ ಭಾರ ತಾಳಲಾರದೇ ಉತ್ತರ ಭಾರತ ಕುಸಿಯಬಹುದೆಂಬ ಭೀತಿಯಿಂದ ಅಗಸ್ತ್ಯಮುನಿಯನ್ನು ಈ ಸ್ಥಳಕ್ಕೆ ಕಳುಹಿಸಿದ್ದರಂತೆ. ಅಗಸ್ತ್ಯಮುನಿ ಈ ಸ್ಥಳದಲ್ಲಿಯೇ ಭೂಮಿಯನ್ನು ಸಮತೋಲನದಲ್ಲಿಸಿದ್ದರಂತೆ.