ಮಾಂಗಲ್ಯ ವನವು, ಕೈಲಾಶ ತೇಕರಿ ಎಂಬ ಬೆಟ್ಟದ ಮೇಲಿದ್ದು, ಖೇದಬ್ರಹ್ಮ ರಾಷ್ಟ್ರೀಯ ಹೆದ್ದಾರಿಯಲ್ಲಿರುವ, ಅಂಬಾಜಿ ಮಂದಿರದಿಂದ ಒಂದು ಕಿಲೋಮೀಟರ್ ಗಿಂತಲೂ ಹೆಚ್ಚು ದೂರದಲ್ಲಿದೆ.
ಈ ವನದಲ್ಲಿದಲ್ಲಿ ಒಂದು ಅದ್ವಿತೀಯವಾದ ಜ್ಯೋತಿಶಾಸ್ತ್ರೀಯ ಉದ್ಯಾನವಿದೆ. ಇದರ ವೈಶಿಷ್ಟ್ಯವೇನೆಂದರೆ ಇಲ್ಲಿ 3 ಗಿಡಗಳಿದ್ದು, ಪ್ರತಿಯೊಂದೂ ಸಹ ಪ್ರತಿಯೊಂದು ರಾಶಿಯಗಾಗಿ ಮೀಸಲಾಗಿದೆ. ಜ್ಯೋತಿಷ್ಯ ಶಾಸ್ತ್ರಜ್ಞರು ಪ್ರತಿಪಾದಿಸುವಂತೆ, ಓರ್ವ ವ್ಯಕ್ತಿಯ ಜೀವನದ ಮೇಲೆ, ಹರಳುಕಲ್ಲುಗಳು ಯಾವ ಪ್ರಭಾವವನ್ನು ಹೊಂದಿವೆಯೂ, ಅದೇ ಪ್ರಭಾವವನ್ನು ಈ ಸಸ್ಯಗಳು ಕೂಡ ಹೊಂದಿವೆ.
ಈ ಜ್ಯೋತಿಶಾಸ್ತ್ರೀಯ ಸಸ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕೋಸ್ಕರ ಪ್ರವಾಸಿಗರು ಇಲ್ಲಿಗೆ ಮುಗಿಬೀಳುತ್ತಾರೆ ಮತ್ತು ಕೆಲವು ಸಂದರ್ಶಕರು ಈ ಸಸಿಗಳ ಒಂದು ಭಾಗವನ್ನು ತಮ್ಮ ಮನೆಗಳಿಗೂ ಕೊಂಡೊಯ್ಯುತ್ತಾರೆ. ವ್ಯಕ್ತಿಯೋರ್ವನು ತನ್ನ ರಾಶಿಗೆ ಅನುಗುಣವಾದ ಸಸಿಗಳನ್ನು ತನ್ನ ಮನೆಯಲ್ಲಿ ನೆಟ್ಟರೆ, ಅದರಿಂದ ಆ ವ್ಯಕ್ತಿಯು ಅದೃಷ್ಟವನ್ನು ಪಡೆಯುವಂತಾಗುತ್ತದೆ ಎಂಬ ನಂಬಿಕೆಯೊಂದಿದೆ.