ಅಮರನಾಥ ಯಾತ್ರೆಯೆಂದರೆ ಅದು ಶಿವನ ದರ್ಶನದ ಯಾತ್ರೆ. ಹಿಂದೂ ಪಂಚಾಂಗದ ಐದನೇ ತಿಂಗಳಲ್ಲಿ ಅಂದರೆ ಶ್ರಾವಣ ಮಾಸದಲ್ಲಿ ಜಮ್ಮು ಕಾಶ್ಮೀರ ಸರ್ಕಾರದ ವತಿಯಿಂದ ಅಮರನಾಥ ಯಾತ್ರೆ ಕೈಗೊಳ್ಳಲಾಗುತ್ತದೆ. ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಹತ್ತಾರು ಕಷ್ಟ-ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ - ಅಹಿತಕರ ವಾತಾವರಣ, ನಡಿಗೆಯ ಕಷ್ಟ ಇತ್ಯಾದಿ. ಈ ಯಾತ್ರೆಯು ಕಠಿಣವಾದ ಎತ್ತರದ ಪಹಲ್ಗಮ್ ನಿಂದ ಶುರುವಾಗುತ್ತದೆ. ಅಮರನಾಥ ಗುಹೆಗೆ ಹತ್ತುವ ಹಾದಿಯಲ್ಲಿ ಮನಸೂರೆಗೊಳ್ಳುವ ಸೌಂದರ್ಯ ಮನಸ್ಸಿಗೆ ಉಲ್ಲಾಸ ತುಂಬುತ್ತದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಹೊರತಾಗಿ ವರ್ಷವಿಡೀ ಇಲ್ಲಿ ಹಿಮ ಉದುರುವ ವಾತಾವರಣ. ಈ ಕಾರಣಕ್ಕೆ ಕೇವಲ ಈ ಸಮಯದಲ್ಲಿ ಮಾತ್ರ ದೇವಸ್ಥಾನದ ಬಾಗಿಲು ತೆರೆದಿರುತ್ತದೆ.