ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾರ್ತಾಂಡ ವರ್ಮ ಸೇತುವೆಯು ತಿರುವಾಂಕೂರ್ ಎಂಬ ಊರಿನಲ್ಲಿದೆ. ಹತ್ತಿರದ ರಾಜ್ಯಗಳ ನಡುವೆ ವ್ಯಾಪಾರ ಮತ್ತು ವ್ಯವಹಾರಗಳ ಉದ್ದೇಶದಿಂದ 1940-42 ರ ಅವಧಿಯಲ್ಲಿ ತಿರುವಾಂಕೂರಿನ ರಾಜನಾದ ಮಾರ್ತಾಂಡ ವರ್ಮ ಇಳಯರಾಜ ಇದನ್ನು ನಿರ್ಮಿಸಿದನೆಂದು ಪ್ರತಿತಿಯಿದೆ. ಸೇತುವೆಯು, ನಂತರ ಅಲುವಾ ಗ್ರಾಮದ ನಿವಾಸಿಗಳಿಗೆ ಜೀವನಾಧಾರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಈ ಸೇತುವೆಯ ಇತಿಹಾಸವು ತುಂಬ ಹಳೆಯದಾದ್ದರಿಂದ ಕೇರಳ ಸರ್ಕಾರವು 2002 ಜೂನ್ ನಲ್ಲಿ ಪುನರುಜ್ಜೀವನಗೊಳಿಸಿತು. ಈ ಸೇತುವೆಯ ಮೇಲೆ ನಿಂತು ಪ್ರವಾಸಿಗರು ಪೆರಿಯಾರ್ ನದಿಯ ವಿಹಂಗಮ ನೋಟವನ್ನು ಸವಿಯಬಹುದು.