ಐಹೊಳೆಯ ವಾಸ್ತುಶಿಲ್ಪ ಎಂತಹ ಧಾರ್ಮಿಕರನ್ನು ಹಾಗೂ ಪುರಾತನ ಶೋಧಕರನ್ನೂ ನಿಬ್ಬೆರಗಾಗಿಸುವುದರಲ್ಲಿ ಎರಡು ಮಾತಿಲ್ಲ. ಈ ಪಟ್ಟಣವು ಚಾಲುಕ್ಯರು ನಿರ್ಮಿಸಿರುವ ಹಲವು ದೇವಾಲಯಗಳನ್ನು ಒಳಗೊಂಡಿದೆ . ನಮ್ಮ ಕಣ್ಣಿಗೆ ಕಾಣುವ ಹಾಗೆ ಐಹೊಳೆಯಲ್ಲಿನ ದೇವಲಯಗಳು ಚಾಲುಕ್ಯರ ಪರಿಶ್ರಮದಿಂದ ಅಂದಿಗೆ ವಿಕಸನಗೊಳ್ಳುವ ಹಾದಿಯಲ್ಲಿ ಚಾಲುಕ್ಯರ ಪ್ರತ್ಯೇಕ ವಾಸ್ತುಶಿಲ್ಪ ಶೈಲಿಗೆ ಕೈಗನ್ನಡಿ ಹಿಡಿದಂತಿವೆ.
ಹೆಸರಿನ ಹಿಂದಿರುವ ದಂತಕಥೆ
ಐಹೊಳೆ ಚಾಲುಕ್ಯರ ಮೊದಲ ರಾಜಧಾನಿಯಾಗಿತ್ತು . ಹಲವು ದಂತಕತೆಗಳನ್ನು ಸಾರಿಹೇಳುವ ಈ ಪಟ್ಟಣ್ಣ ನೆಲೆಸಿರುವುದು ಮಲಪ್ರಭಾ ನದಿಯ ದಂಡೆಯ ಮೇಲೆ. ಒಂದು ದಂತಕಥೆಯ ಪ್ರಕಾರ, ಬ್ರಾಹ್ಮಣ ಯೋದ್ಧನಾಗಿದ್ದ ಪರಶುರಾಮನು ಇಲ್ಲಿ ನೆಲೆಸಿದ್ದನೆಂದು ಪ್ರತಿಪಾದಿಸುತ್ತದೆ. ಅದರ ಪ್ರಕಾರ, ಆತನು ಹಲವು ಮುಖ್ಯ ಕ್ಷತ್ರಿಯರನ್ನು ಹತ್ಯೆಮಾಡಿದ ಬಳಿಕ , ಇಲ್ಲಿಗೆ ಬಂದು ತನ್ನ ರಕ್ತಸಿಕ್ತ ಕೊಡಲಿಯನ್ನು ಮಲಪ್ರಭಾ ನದಿಯಲ್ಲಿ ಸ್ವಚ್ಛಗೊಳಿಸಿದನಂತೆ. ಆ ಕೊಡಲಿಯಲ್ಲಿ ಎಷ್ಟರ ಮಟ್ಟಕ್ಕೆ ರಕ್ತ ಅಂಟಿಕೊಂಡಿತ್ತೆಂದರೆ ನದಿಯ ನೀರೆಲ್ಲವೂ ಕೆಂಪು ಬಣ್ಣಕ್ಕೆ ತಿರುಗಿತ್ತು . ಇದರಿಂದ ಈ ಪ್ರದೇಶಕ್ಕೆ “ ಐಹೊಳೆ “ ಎಂದರೇ “ ಎಂತಹಾ ಹೊಳೆ !!” ಎಂಬ ಹೆಸರು ಬಂದಿದೆ .
ಐಹೊಳೆ ಇವುಗಳಿಗೆ ಸುಪ್ರಸಿದ್ಧ !
ಐಹೊಳೆಯಲ್ಲಿ 125 ಚಾಲುಕ್ಯರ ದೇವಲಯಗಳಿದ್ದು ಅವುಗಳಲ್ಲಿ ಅತೀ ಪುರಾತನವಾದುದು ಲಾಡ್ ಖಾನ್ ದೇವಾಲಯ ಇದರ ಮೂಲ ಇರುವುದು 5ನೇ ಶತಮಾನದಲ್ಲಿ . ಇದನ್ನು ಹೊರತು ಪಡಿಸಿದರೆ ಇತರೆ ದೇವಲಯಗಳಾದ ಗೌಡ ದೇವಾಲಯ ,ಸೂರ್ಯನಾರಾಯಣ ದೇವಾಲಯ ಮತ್ತು ದುರ್ಗ ದೇವಾಲಯ ಪ್ರಸಿದ್ಧಿ ಪಡೆದಿವೆ . ಇಲ್ಲಿರುವುದರಲ್ಲಿ ಒಂದಾದ ರಾವಣ ಪಧಿ ಗುಹೆ ದೇವಾಲಯವು ಅತೀ ಪುರಾತನ ಶಿಲ್ಪಕೆತ್ತನೆಯ ಗುಹಾಲಯ. ಐಹೊಳೆಯು ಅದರ ಚರಿತ್ರೆಯನ್ನು ನೆನಪಿಸುವಂತಹ ಒಂದು ಶಾಸನಕ್ಕೂ ಹೆಸರಾಗಿದೆ. ಈ ಸ್ಥಳವು ಬೆಂಗಳೂರಿನಿಂದ 483 ಕಿ ಮೀ ದೂರದಲ್ಲಿದ್ದು ಸುಗಮ ರಸ್ತೆ ಸಂಪರ್ಕವನ್ನೂ ಹೊಂದಿದೆ. ಇದಕ್ಕೆ ಅತಿ ಸಮೀಪದ ರೈಲ್ವೇ ನಿಲ್ದಾಣವೆಂದರೆ ಬಾದಾಮಿ ಯಲ್ಲಿರುವ ನಿಲ್ದಾಣ