ಪ್ರಸ್ತುತ ರಾಜ್ಯ ವಿಧಾನಸಭೆ, ಉಜ್ಜಯಂತ ಅರಮನೆ ಅಗರ್ತಲಾದ ಅತ್ಯಂತ ವಿಸ್ಮಯ ಹುಟ್ಟಿಸುವ ವಾಸ್ತುಶಿಲ್ಪದ ಪ್ರತಿಭೆಯಲ್ಲಿ ಒಂದಾಗಿದೆ. ಇಂಡೋ-ಗ್ರೀಕ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇದನ್ನು ಮಹಾರಾಜ ರಾಧಾ ಕಿಶೋರ ಮಾಣಿಕ್ಯ ಕಟ್ಟಿಸಿದ್ದಾರೆ. ಇದನ್ನು 1899-1901 ಅವಧಿಯಲ್ಲಿ ನಿರ್ಮಿಸಲಾಯಿತು ಮತ್ತು ಸರ್ ಅಲೆಕ್ಸಾಂಡರ್ ಮಾರ್ಟಿನ್ ಆಫ್ ಮೆಸರ್ಸ್ ಮಾರ್ಟಿನ್ ಮತ್ತು ಕಂಪನಿ ಈ ಅರಮನೆಯ ಮುಖ್ಯ ವಿನ್ಯಾಸಕರು. ಅರಮನೆಗೆ, ಉಜ್ಜಯಂತ ಎಂಬ ಹೆಸರನ್ನು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಮೂಲಕ ನೀಡಲಾಯಿತು.
ಕಟ್ಟಡದ ಸುತ್ತಮುತ್ತಲಿನ ಹಲವಾರು ಉದ್ಯಾನಗಳ ಜೊತೆಗೆ ಅರಮನೆಯ ಸಿಂಹಾಸನದ ಕೊಠಡಿ, ದರ್ಬಾರ್ ಹಾಲ್, ಸ್ವಾಗತ ಹಾಲ್ ಮತ್ತು ಗ್ರಂಥಾಲಯ ಒಳಗೊಂಡಿದೆ. ಸುಮಾರು 800 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಸ್ಥಳದಲ್ಲಿ ಜಗನ್ನಾಥ ಮತ್ತು ಉಮಾಮಹೇಶ್ವರ ಈ ಎರಡು ದೇವಾಲಯಗಳನ್ನು ಸಹ ನಿರ್ಮಿಸಲಾಗಿದೆ.
ಇಲ್ಲಿನ ಕಟ್ಟಡದಲ್ಲಿ ಮೂರು ಗುಮ್ಮಟ ತರಹದ ರಚನೆಗಳಿದ್ದು, 26 ಮೀಟರ್ ಎತ್ತರವನ್ನು ಹೊಂದಿದೆ. ಒಳಾಂಗಣದಲ್ಲಿ ಮನೋಹರ ಮರದ ಕೆತ್ತನೆಗಳು, ದೊಡ್ಡ ಬಾಗಿಲು ಮತ್ತು ಸೂಕ್ಷ್ಮ ಕೆತ್ತನೆಗಳನ್ನು ಕಾಣಬಹುದು. ಇದನ್ನು ನಿರ್ಮಿಸಲು ಮಹಾರಾಜ ಆ ಸಮಯದಲ್ಲಿಯೇ 10 ಲಕ್ಷ ರೂಪಾಯಿಗಳನ್ನು ವೆಚ್ಚಮಾಡಿದ್ದ ಎಂದು ನಂಬಲಾಗಿದೆ.