ಕೃಷ್ಣ ಮಂದಿರ ಅಥವಾ ಲಕ್ಷ್ಮಿ ನಾರಾಯಣ ದೇವಾಲಯ ಪಟ್ಟಣದ ಹೃದಯ ಭಾಗದಲ್ಲಿದೆ. ಇದು ಅಗರ್ತಲಾದಲ್ಲಿ ಉಜ್ಜಯಂತ ಅರಮನೆಯ ಮುಖ್ಯ ದ್ವಾರದ ಬಳಿ ನೆಲೆಗೊಂಡಿದೆ. ಮತ್ತು ಮಹಾರಾಜ ಬಿರೇಂದ್ರ್ ಕಿಶೋರ್ ಮಾಣಿಕ್ಯಈ ದೇವಾಲಯವನ್ನು ನಿರ್ಮಿಸಿದರು. ಹಾಗೂ ಅಗರ್ತಲಾದ ನೋಡಲೇಬೇಕಾದ ಅತ್ಯಂತ ಸಂದರ್ಶಿತ ದೈವಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಭಗವಾನ್ ಕೃಷ್ಣ ದೇವಾಲಯದ ಜೊತೆಗೆ ಕೃಷ್ಣನ ಭಕ್ತನಾದ ರಾಜ, ಅರಮನೆಯ ಸುತ್ತ ಹಲವಾರು ಇತರ ದೇವಸ್ಥಾನಗಳನ್ನು ನಿರ್ಮಿಸಿದ್ದಾನೆ. ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣ ಜೊತೆ ಸಂಬಂಧಿತವಾಗಿರುವ ಸುಂದರವಾದ ತಮಲ್ (ಬಿಲ್ಪಪತ್ರೆ) ಮರಗಳನ್ನು ಈ ದೇವಾಲಯದ ಬಳಿ ಕಾಣಬಹುದು.
ಪಟ್ಟಣ ಎಲ್ಲೆಡೆಯಿಂದ ಸಾವಿರಾರು ಪ್ರವಾಸಿಗರು ಪ್ರತಿದಿನ ದೇವರ ಆಶೀರ್ವಾದ ಪಡೆಯಲು ಇಲ್ಲಿಗೆ ಬರುತ್ತಾರೆ. ದೇವಸ್ಥಾನದ ವಾಸ್ತುಶಿಲ್ಪ, ಪ್ರಾಚೀನ ಮತ್ತು ಆಧುನಿಕ ಕಲೆಯ ನಡುವೆ ಒಂದು ಪರಿಪೂರ್ಣ ಸಮಗ್ರತೆಯನ್ನು ಸೂಚಿಸುವ ಸಂಗತಿಯಾಗಿದೆ. ದೇವಾಲಯದ ತ್ರಿಪುರ ರಾಜರ ವೈಭವದ ಆಳ್ವಿಕೆಯನ್ನು ಸೂಚಿಸುತ್ತದೆ.