ತ್ರಿಪುರ ಒಂದು ಗಡಿ ರಾಜ್ಯ ಮತ್ತು ಅಗರ್ತಲಾ ದೇಶದ ಅಂಚಿನಲ್ಲಿ ನೆಲೆಗೊಂಡಿರುವ ನಗರ. ಅಖುರಾ ಬಾರ್ಡರ್, ಹೆಸರೇ ಸೂಚಿಸುವಂತೆ, ಭಾರತ ಮತ್ತು ಬಾಂಗ್ಲಾ ದೇಶವನ್ನು ವಿಂಗಡಿಸುತ್ತದೆ. ಇದು ಎರಡು ರಾಜ್ಯಗಳ ನಡುವೆ ಎಲ್ಲಾ ಚಟುವಟಿಕೆಗಳಿಗೆ ಹೆಬ್ಬಾಗಿಲಾಗಿದೆ. ಇದು ನೆರೆಯ ದೇಶದ ದೊಡ್ಡ ಪ್ರವಾಸಿ ರಸ್ತೆಯನ್ನು ನಿಭಾಯಿಸುತ್ತದೆ.
ಭಾರತ ಸ್ವಾತಂತ್ರ್ಯದ ಮೊದಲು, ಮತ್ತು ಭಾರತ ಮತ್ತು ಪಾಕಿಸ್ತಾನದ ವಿಭಜನೆ ಮೊದಲು, ಅಗರ್ತಲಾ ಮತ್ತು ಪೂರ್ವ ಬಂಗಾಳ ನಡುವೆ ನಿಯಮಿತ ರೈಲು ಸೇವೆ ಇತ್ತು. ರೈಲ್ವೆ ಸೇವೆ ದೇಶದ ಈ ಭಾಗದ ಜನರಿಗೆ ಜೀವಸೆಲೆಯಂತೆ ಕಾರ್ಯನಿರ್ವಹಿಸುತ್ತಿತ್ತು. ಸ್ವಾತಂತ್ರ್ಯಕ್ಕೆ ಮೊದಲು ತ್ರಿಪುರವನ್ನು ಮೊದಲು ಇಂದಿನ ಬಾಂಗ್ಲಾದೇಶ ಮೂಲಕ ಸುಲಭವಾಗಿ ತಲುಪಬಹುದಾಗಿತ್ತು. 1947 ನಂತರ, ಅಸ್ಸಾಂ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಯಾಣದ ಉದ್ದೇಶಕ್ಖಾಗಿ ನಿರ್ಮಿಸಲಾಯಿತು.
ಇಂದು ಅಖುರಾ ಬಾರ್ಡರ್ ಅಂತರರಾಷ್ಟ್ರೀಯ ವ್ಯಾಪಾರ ಹೆಚ್ಚಿಸಿ ರಾಜ್ಯವನ್ನು ಆರ್ಥಿಕವಾಗಿ ಉತ್ತೇಜಿಸುವ ಸ್ಥಳವಾಗಿದೆ. ಗಡಿಯಲ್ಲಿ ಬಾಂಗ್ಲಾದೇಶಕ್ಕೆ ಕಾನೂನು ರೀತ್ಯ ಪ್ರವೇಶ ನೀಡಲಾಗುತ್ತದೆ. ಪ್ರವಾಸಿಗರು ಗಡಿ ಮೆರವಣಿಗೆ ವೀಕ್ಷಿಸಲು ಅಖುರಾ ಬಾರ್ಡರ್ ಗೆ ಭೇಟಿ ನೀಡಬಹುದು.