ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರವು ದೈವಿಕ ಪಾವಿತ್ರ್ಯವನ್ನು ಹೊಂದಿರುವ ಅಡೂರ್ ನಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಅಡೂರ್ ನಿಂದ ಐದು ಕಿ.ಮೀ. ದೂರದಲ್ಲಿರುವ ಮನಂಕಲ ಗ್ರಾಮದಲ್ಲಿ ಈ ಮಂದಿರವಿದೆ. ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರವು ಪುರಾತನ ಮಂದಿರವಾಗಿದ್ದು, ವಿಷ್ಣು ದೇವರ ಮೂರ್ತಿಯನ್ನು ಹೊಂದಿದೆ.
ಉತ್ಸವದ ಸಂದರ್ಭದಲ್ಲಿ ಕೇರಳದ ಎಲ್ಲಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ದಶವತರಚರ್ತು ಉತ್ಸವ ಮಂದಿರದಲ್ಲಿ ಆಚರಿಸಲ್ಪಡುವ ಪ್ರಮುಖ ಉತ್ಸವ. ವಾರ್ಷಿಕವಾಗಿ ನಡೆಯುವ ಈ ಉತ್ಸವವು ಹತ್ತು ದಿನಗಳ ಕಾಲ ನಡೆಯುತ್ತದೆ. ಉತ್ಸವದ ವೇಳೆ ವಿಷ್ಣುವಿನ ಹತ್ತು ಅವತಾರಗಳನ್ನು ಪ್ರತೀ ದಿನ ಒಂದೊಂದರಂತೆ ಪೂಜಿಸಲಾಗುತ್ತದೆ. ಕೇರಳದಲ್ಲಿ ದಶವತರಚರ್ತು ಉತ್ಸವನ್ನು ಆಚರಿಸಲ್ಪಡುವ ಏಕೈಕ ದೇವಸ್ಥಾನ ಇದಾಗಿರುವ ಕಾರಣ ಭಾರೀ ಸಂಖ್ಯೆಯ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ದೇವಾಲಯದ ವಾತಾವರಣವು ಪ್ರಶಾಂತವಾಗಿದೆ ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದರೆ ಆಧ್ಯಾತ್ಮಿಕ ಶಕ್ತಿ ವರ್ಧಿಸುತ್ತದೆ.