ಕೇರಳದಲ್ಲಿರುವ ಕೃಷ್ಣ ದೇವರ ಮಂದಿರಗಳಲ್ಲಿ ಅತ್ಯಂತ ಪುರಾತನವಾಗಿರುವ ಪಾರ್ಥಸಾರಥಿ ಮಂದಿರಕ್ಕೆ ಭೇಟಿ ನೀಡಲೆಂದೇ ಯಾತ್ರಾರ್ಥಿಗಳು ಅಡೂರ್ ಗೆ ಭೇಟಿ ನೀಡುತ್ತಾರೆ. ಕೃಷ್ಣನ ಒಂದು ಅವತಾರವಾಗಿರುವ ಪಾರ್ಥಸಾರಥಿಯನ್ನು ಈ ಮಂದಿರದಲ್ಲಿ ಪೂಜಿಸಲಾಗುತ್ತದೆ. ಗಣಪತಿ ಮತ್ತು ಈಶ್ವರ ದೇವರು ಪಾರ್ಥಸಾರಥಿ ಮಂದಿರದಲ್ಲಿ ಪೂಜಿಸಲ್ಪಡುವ ಇತರ ಎರಡು ಪ್ರಮುಖ ದೇವರು. ಹತ್ತು ದಿನಗಳ ಕಾಲ ಇಲ್ಲಿ ನಡೆಯುವ ವಾರ್ಷಿಕ ಉತ್ಸವಕ್ಕೆ ಕೇರಳದ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.
ಹಬ್ಬದ ಕೊನೆಯ ದಿನ ಏರ್ಪಡಿಸುವಂಹತ ಗಜಮೇಳವು ಇಲ್ಲಿನ ಪ್ರಮುಖ ಆಕರ್ಷಣೆ. ಶೃಂಗರಿಸಲ್ಪಟ್ಟ 9 ಆನೆಗಳನ್ನು ಮಂದಿರದ ಮುಂದೆ ನಿಲ್ಲಿಸಲಾಗುತ್ತದೆ ಮತ್ತು ಇದರ ಬಳಿಕ ನಡೆಯಲಿರುವ ಭವ್ಯ ಮೆರವಣಿಗೆಯಲ್ಲಿ ಇವುಗಳು ಪಾಲ್ಗೊಳ್ಳುವುದನ್ನ ನೋಡುವುದು ಪ್ರವಾಸಿಗರ ಕಣ್ಣಿಗೊಂದು ಹಬ್ಬ. ಭಗವಂತ ಕೃಷ್ಣನ ಹುಟ್ಟಿದ ದಿನವಾದ ಅಷ್ಟಮಿ ರೋಹಿಣಿ ಹಬ್ಬ ಇಲ್ಲಿ ಆಚರಿಸಲ್ಪಡುವ ಮತ್ತೊಂದು ಹಬ್ಬ. ಪರಿಚಮುಟ್ಟುಕಲಿ, ಮಯೂರ ನೃತ್ಯಂ, ಅಮ್ಮಂಕುಡಂ ಮತ್ತು ವೆಲಕಲಿಯಂತಹ ಜಾನಪದ ನೃತ್ಯ ಪ್ರಕಾರಗಳು ಉತ್ಸವದ ವೇಳೆ ಪ್ರದರ್ಶಿಸಲ್ಪಡುತ್ತದೆ.